+91-8482-245241 regkvafsu@gmail.com

ಜಾನುವಾರು ಉತ್ಪಾದನೆ ನಿರ್ವಹಣೆ ವಿಭಾಗ

ವಿಭಾಗವು ಪ್ರಾರಂಭವಾದಾಗಿನಿಂದ ಪ್ರೊ. ಪ್ರಭಾಕರ ಹೆಗ್ಡೆ, ಪ್ರೊ. ಎಂ. ಎಂ. ಕೈಲಾಸ್, ಪ್ರೊ. ಆರ್. ಭಾಸ್ಕರನ್, ಪ್ರೊ. ಯು. ಕೃಷ್ಣಮೂರ್ತಿ, ಪ್ರೊ. ವೈ. ಬಿ. ರಾಜೇಶ್ವರಿ, ಪ್ರೊ. ಎಚ್. ಎನ್. ನರಸಿಂಹಮೂರ್ತಿ, ಡಾ. ವಿ. ಮಾಲತಿ, ಡಾ. ಎಸ್. ಬಿ. ಪ್ರಸನ್ನ, ಡಾ. ಮಹದೇವಪ್ಪ ಡಿ. ಗೌರಿ ಅವರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ. ವಿವೇಕ್ ಎಂ. ಪಾಟೀಲ್ ಅವರು ಈಗ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಜಾನುವಾರು ಉತ್ಪಾದನೆ ನಿರ್ವಹಣೆ ವಿಭಾಗದಲ್ಲಿ ಪ್ರಸ್ತುತ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ ವಿಷಯಗಳನ್ನು ಬೋಧಿಸಲಾಗುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಸುಜಲ ಯೋಜನೆಯಲ್ಲಿ ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರಿಗೆ ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.